State Budget : ರಾಜ್ಯ ಬಜೆಟ್ ಅಧಿವೇಶನ ಆರಂಭ|ಸಿದ್ದರಾಮಯ್ಯ 15ನೇ ಬಜೆಟ್ ನಿರೀಕ್ಷೆ ಹೆಚ್ಚಾಗಿದೆ.

State Budget:ಫೆಬ್ರುವರಿ 12. ರಿಂದ ರಾಜ್ಯ ಬಜೆಟ್ ಆರಂಭವಾಗಿದ್ದು , ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಪಾಲರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರ ಬಗ್ಗೆ  ಮಾತನಾಡಲಿದ್ದಾರೆ. ಇದಾದ ನಂತರ ಫೆಬ್ರುವರಿ 16 ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯನ್ನು ಮಾಡಲಿದ್ದಾರೆ.

WhatsApp Group Join Now
Telegram Group Join Now       

 

ಫೆಬ್ರುವರಿ 16 ರಂದು ರಾಜ್ಯದ ಮುಖ್ಯ ಮಂತ್ರಿ ಬಜೆಟ್ ಅನ್ನು ಘೋಷಿಸಲಿದ್ದಾರೆ. ಈ ಸಲದ ಬಜೆಟ್ ಲೋಕ ಸಭಾ ಚುನಾವಣೆಯ ಸಮಯದಲ್ಲಿ ಬಂದ ಕಾರಣ ಹೆಚ್ಚೆಚ್ಚು ಮಹತ್ವ ಪಡೆದು ಕೊಳ್ಳುತ್ತಿದೆ.ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 15 ನೇ ಬಜೆಟ್ ಇದಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪಾಲಿಗೆ ಇದೊಂದು ದಾಖಲೆ ಆಗಲಿದೆ.

 

ಇದನ್ನೂ ಓದಿ:Free sewing machine 2024! ಉಚಿತ ಹೊಲಿಗೆ ಯಂತ್ರಕ್ಕಾಗಿ ಈಗಲೇ ಅರ್ಜಿ ಸಲ್ಲಿಸಿ!

 

State Budget ಕೆಲವು ಜಿಲ್ಲಾವಾರು ಮುಖ್ಯ ನಿರೀಕ್ಷೆ ಯಾವುವು?

ಕರ್ನಾಟಕ ರಾಜ್ಯ ಬಜೆಟ್ ವಿವರ

 

ಧಾರವಾಡ : ಹಾಸ್ಟೆಲ್ ಗಳ ನಿರ್ಮಾಣ ಬೇಡಿಕೆ

  1. ಪ್ರಾದೇಶಿಕವಾಗಿ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯ ಬೇಡಿಕೆ. ಧಾರವಾಡಕ್ಕೆ ಬೇರೆ ರಾಜ್ಯದಿಂದ ವಿದ್ಯಾಭ್ಯಾಸಕ್ಕಾಗಿ ಬರುವವರಿಗೆ ಹೆಚ್ಚುವರಿ ಹಾಸ್ಟೆಲ್ ನಿರ್ಮಾಣ ಬೇಡಿಕೆ.

ಗದಗ: ಜನರು ಗುಳೆ ಹೋಗದಂತೆ ಮಾಡಲು ಬೇಡಿಕೆ

ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿಗೆ, ಮತ್ತು ಜನರು ಗುಳೆ ಹೋಗದಂತೆ ಯೋಜನೆಗಳು.

ಬೆಳಗಾವಿ: ಇಲಾಖೆಗಳನ್ನು ಸ್ಥಳಾಂತರಿಸುವುದು

ಸುವರ್ಣ ವಿಧಾನಸೌಧ ಕ್ಕೆ ಬೇಕಾಗುವ ಇಲಾಖೆಗಳ ರಚಿಸಬೇಕು. ಮಹದಾಯಿ ಯೋಜನೆಯನ್ನು ತಕ್ಷಣ ಪರಿಹರಿಸಬೇಕು. ಕಿತ್ತೂರು ಅಭಿವೃದ್ದಿ ಯೋಜನೆ ರಚಿಸಬೇಕು.

ಬಾಗಲಕೋಟೆ: ವೈದ್ಯಕೀಯ ಕಾಲೇಜುಗಳ ಅಭಿವೃದ್ದಿಸರಕಾರಿ ವೈದ್ಯಕೀಯ ಕಾಲೇಜುಗಳ ಪ್ರಾರಂಭ ಬೇಡಿಕೆ. ಜವಳಿ ಪಾರ್ಕ್ ಪ್ರಾರಂಭಕ್ಕೆ ಬೇಡಿಕೆ . ಪ್ರವಾಸಿ ತಾಣಗಳನ್ನು ಅಭಿವೃದ್ದಿ ಪಡಿಸಲು ಬೇಡಿಕೆ.

ದಕ್ಷಿಣ ಕನ್ನಡ: ಬೊಟ್ಗಳ ಸಂಚಾರಕ್ಕೆ ವ್ಯವಸ್ಥೆಕಾಂಗ್ರೆಸ್ ಮೊದಲೇ ಮಂಗಳೂರಿನಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಸುವುದು ಎಂದು ಹೇಳಿತ್ತು, ಅದು ಇನ್ನು ಅನುಸ್ತನಗೊಂಡಿಲ್ಲ ಈಗಿನ ಬಜೆಟ್ ನಲ್ಲಿ ಅದು ಪೂರ್ಣ ಗೊಳ್ಳಬಹುದು ಎಂಬ ನಿರೀಕ್ಷೆ ಇದೆ. ಮೀನುಗಾರರ ಅನುಕೂಲಕ್ಕಾಗಿ ಬೋಟ್ಗಳ ಸಂಚಾರಕ್ಕೆ ವ್ಯವಸ್ಥೆ ನಿರ್ಮಿಸಲು ಬೇಡಿಕೆ.

ಶಿವಮೊಗ್ಗ: ಸಂತ್ರಸ್ತ ರುಗಳಿಗೆ ನ್ಯಾಯ ನಿರೀಕ್ಷೆಶಿ

ವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಾದ ಮಂಗನ ಕಾಯಿಲೆಗೆ ಲಸಿಕೆ ಒದಗಿಸಬೇಕು. ಮಲೆನಾಡು ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಬೇಡಿಕೆ.

ಕೊಪ್ಪಳ: ಅಂಜನಾದ್ರಿ ಅಭಿವೃದ್ಧಿ ಬೇಡಿಕೆ

ಅಂಜನಾದ್ರಿ ಬೆಟ್ಟದಲ್ಲಿರುವ ಹನುಮಾನ್ ಜನ್ಮಸ್ಥಳವನ್ನು ಅಭಿವೃದ್ದಿ ಪಡಿಸಲು ಬೇಡಿಕೆ ನೀಡಿದ್ದಾರೆ. ಅಲ್ಲಿನ ಕೆರೆಗಳ ತುಂಬಲು ವಿಶೇಷ ಯೋಜನೆ ಮಾಡಬೇಕೆಂದಿದ್ದರೆ.

ಮೈಸೂರು: ಕಾರ್ಖಾನೆಗಳ ಕಾರಿಡಾರ್ ಗಳಿಗೆ ಹೊತ್ತು

ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯ ಬೇಡಿಕೆ. ಕಾರ್ಖಾನೆಗಳ ಕಾರಿಡಾರ್ ಸ್ಥಾಪನೆ. ಬೆಂಗಳೂರು ಮತ್ತು ಮೈಸೂರು ಮದ್ಯ ಕಾರ್ಖಾನೆಗಳ ಕಾರಿಡಾರ್ ನಿರ್ಮಾಣಕ್ಕೆ ಹೊತ್ತು.

ಕಲಬುರ್ಗಿ: ಕೈಗಾರಿಕೆಗಳ ಬೇಡಿಕೆ

ಕಲಬುರ್ಗಿಯ ಕರ್ನಾಟಕ ತೊಗರಿ ಅಭಿವೃದ್ದಿ ಮಂಡಳಿಗೆ ಹೊತ್ತು ನೀಡುವುದು. ನೀರಾವರಿ ಯೋಜನೆಗೆ ಹೆಚ್ಚೆಚ್ಚು ಬಜೆಟ್ ಬೇಡಿಕೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಕೈಗಾರಿಕ ನೀತಿಯ ಬೇಡಿಕೆ

ಯಾದಗಿರಿ: ಹೊಸ ತಾಲೂಕುಗಳ ಅಭಿವೃದ್ದಿ

ಹೊಸಾ ತಾಲೂಕುಗಳನ್ನು ಅಭಿವೃದ್ದಿ ಪಡಿಸಲು ಬಜೆಟ್ ಬೇಡಿಕೆ ಮತ್ತು ಹೊಸ ತಾಲೂಕು ಗಳಲ್ಲಿ ಕಾಲೇಜುಗಳ ಬೇಡಿಕೆ.

ವಿಜಯನಗರ: ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ದಿ

ಪ್ರವಾಸಿ ತಾಣವಾದ ಹಂಪಿಗೆ ವಿಶೇಷ ಅನುದಾನ ಕೋರಿಕೆ. ಹೊಸ ಜಿಲ್ಲೆ ವಿಜಯನಗರಕ್ಕೆ ಜಿಲ್ಲಾಡಳಿತ ಭವನ, ಇನ್ನಿತರೇ ಮೂಲಸೌಕರ್ಯಗಳ ಬೇಡಿಕೆ ನೀಡಲಾಗಿದೆ.

 

ಇದನ್ನೂ ಓದಿ:ವಾಹನಗಳಿಗೆ HSRP ಯ  ಫಲಕ ಅಳವಡಿಕೆ ಕೊನೆಯ ದಿನಾಂಕ! ಇಲ್ಲವಾದರೆ ₹1000 ದಂಡ!HSRP number plate .

 

ಇನ್ನೂ ಹಲವು ಜಿಲ್ಲೆಗಳು ತಮ್ಮ ತಮ್ಮ ನಿರೀಕ್ಷೆಯನ್ನು ರಾಜ್ಯದ ಬಜೆಟ್ ಮೇಲೆ ಇಟ್ಟಿವೆ ಮತ್ತು ತಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ಒದಗಿಸಿವೆ. ಒಟ್ಟಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ನಿರೀಕ್ಷೆ ಹೆಚ್ಚಾಗಿದೆ.

ನಿಮಗೆ ನಮ್ಮ ಈ ವಿವರಣೆ ಇಷ್ಟವಾದಲ್ಲಿ ಪ್ರತಿ ದಿನದ ಮಾಹಿತಿಗಾಗಿ ಈ ವೆಬ್ ಸೈಟ್ ಬೇಟಿ ನೀಡಿ.

1 thought on “State Budget : ರಾಜ್ಯ ಬಜೆಟ್ ಅಧಿವೇಶನ ಆರಂಭ|ಸಿದ್ದರಾಮಯ್ಯ 15ನೇ ಬಜೆಟ್ ನಿರೀಕ್ಷೆ ಹೆಚ್ಚಾಗಿದೆ.”

Leave a Comment